ಸೋಮವಾರ, ಜುಲೈ 23, 2018

ಪತ್ರಕರ್ತರ ದಿವ್ಯ ಮೌನ



ಸುಸುಮಾರು ಎರಡು ವರ್ಷಗಳ ಹಿಂದೆ ಒಬ್ಬ ಹೆಸರಾಂತ ಪತ್ರಕರ್ತರು ಒಂದು ಮಕ್ಕಳ ನಾಟಕ ಸಂಕಲನಕ್ಕಾಗಿ ನಾಟಕಗಳನ್ನು ಆಹ್ವಾನಿಸಿದ್ದರು. ಅದರಂತೇ ನಾನು ನಾಟಕವೊಂದನ್ನು ಕಳಿಸಿದೆ. ನಂತರ ಅವರು ಅವರ ಟಿವಿ ಪ್ರೋಗ್ರಾಂ ಗಳ ನ್ನು ನೋಡುವಂತೆ ಮೆಸೇಜ್ ಮಾಡಿದ್ದರು. ಅವರ ಮಾತನ್ನು ಗೌರವಿಸಿ ಆ ಕಾರ್ಯಕ್ರಮವನ್ನು ನೋಡಿ ಅವರಿಗೆ ನನ್ನ ಅಭಿಪ್ರಾಯ ತಿಳಿಸಿದೆ. ಕೆಲದಿನಗಳ ನಂತರ ಇನ್ಯಾವುದೋ ಲಿಂಕ್ ಶೆರ್ ಮಾಡಲು ಹೇಳಿದರು. ಮಾಡೆ. ಆರೇಳು ತಿಂಗಳು ಅವರಾಗೇ ನಾನು ಕಳಿಸಿದ್ದ ನಾಟಕದ ಬಗ್ಗೆ ಹೇಳಬಹುದೆಂದು ಕಾದರೂ ಆ ಬಗ್ಗೆ ಚಕಾರವಿಲ್ಲ!! ನಂತರ ನಾನೇ ಕೇಳಿದೆ. ಅದಕ್ಕೆ ಉತ್ತರ ಇಲ್ಲ.. ಆದರೆ ಏನಾದರೂ ಶೇರ್ ಮಾಡಲು ಕೇಳುವುದು ನಡೆದಿತ್ತು.


ಅವರು ಒಂದು ಈ ಪತ್ರಿಕೆಯನ್ನೂ ನಡೆಸುವವರಾದ್ದರಿಂದ ನಾನು ಕಥೆಯನ್ನು ಕಳಿಸಲೇ ಎಂದು ಅವರ ಪರಿಚಯವಾದ ಆರಂಭದಲ್ಲೇ ಕೇಳಿದ್ದೆ. ತಕ್ಷಣ ವೇ ಕಳಿಸಿ ಎಂದಿದ್ದರು. ನಾನು ಯಾವ ಕಥೆಯನ್ನು ಕಳಿಸಬೇಕೆಂದಿದ್ದೆನೋ ಅದನ್ನು ಕಳಿಸದೇ ಇಲ್ಲಿ ಹಾಕಿ ತುಂಬ ಜನ ಮೆಚ್ಚಿದ್ದ ಒಂದು ಕಿರುಗಥೆಯನ್ನು ಕಳಿಸಿದೆ..


ಅದಕ್ಕೂ ಪ್ರತಿಕ್ರಿಯೆ ಇಲ್ಲ.. ಎರಡು ಮೂರು ತಿಂಗಳು ಬಿಟ್ಟು ನಾಟಕದ ಬಗ್ಗೆ ಕಥೆಯ ಬಗ್ಗೆ ವಿಚಾರಿಸಿದರೆ ದೊರೆತ ಉತ್ತರ ದಿವ್ಯ ಮೌನ..


ಕೆಲ ದಿನಗಳ ಹಿಂದೆ ಒಂದು ಅನಾಮಿಕ ನಂಬರಿಂದ ಸಂದೇಶಇದು ಎಲ್ಲರ ಮನೆಯಲ್ಲಿರಬೇಕಾದ ಪುಸ್ತಕ ಇಷ್ಟು ದುಡ್ಡು ಕಳಿಸಿ ಕೊಂಡುಕೊಳ್ಳಿ ..ಎಂದು.. ನಾಣು ಯಾರೋ ಎಂದು ಅಲಕ್ಷಿಸಿದೆ.. ಮತ್ತೆ ಕೆಲ ದಿನಗಳ ನಂತರ ಇನ್ನೊಂದು ಪುಸ್ತಕದ ಬಗ್ಗೆ ಅದೇ ಮಾದರಿಯ ಮೆಸೇಜ್.. ಆಗ ನಾನು,“ ಕ್ಷಮಿಸಿ ನಿಮ್ಮಪರಿಚಯವಾಗಲಿಲ್ಲ..ಎಂದು ಕೇಳಿದೆ.. ಆಗ ಅವರು ತಾವು ಇದೇ ಮಹನೀಯರ ಆಫೀಸಿನ ಅಡ್ಮಿನ್ ಎಂದು ತಿಳಿಸಿದರು.


ಅಲ್ಲ.. ನಿಮ್ಮ ಲೇಖನ /ಕಥೆ ಇಂಥ ಕಾರಣಕ್ಕೆ ಸ್ವೀಕೃತವಾಗಿಲ್ಲ ಎಂದು ಒಂದು ಮೆಸೇಜ್ ಮಾಡಿಸುವುದು ಆಫೀಸ್ , ಅಡ್ಮಿನ್ ಎಲ್ಲಾ ಇರುವವರಿಗೆ ಅಷ್ಟು ಕಷ್ಟವೇ. ಬರೆದು ಕಳಿಸಿದವರು ಉತ್ತರವನ್ನು ನಿರೀಕ್ಷಿಸುತ್ತಾರೆ ಎಂಬ ವಿಚಾರ ಅವರಿಗೆ ತಿಳಿಯದೇ? ನಮ್ಮ ಬರವಣಿಗೆಗೆ ಬೆಲೆಯೇ ಇಲ್ಲವೇ ? ಛೇ..


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ