ಶುಕ್ರವಾರ, ಡಿಸೆಂಬರ್ 20, 2019

ಭಯ'

ಒಂದು ಪುಟ್ಟ ಕಥೆ.. ಬರೀ ಕವನ ಓದಿ ಬೇಸರವಾಗಿದ್ದವರು ಓದಿ ..

ಒಂದು ಪುಟ್ಟ ಊರಿತ್ತಂತೆ. ಒಂದಿನ ಆ ಊರಿಗೆ ಒಬ್ಬ ದೊಡ್ದ ರಾಕ್ಷಸ ಬಂದನಂತೆ.. ಅವನು ಬೆಟ್ಟ ಕ್ಕಿಂತಾ ಭಾರೀ ಗಾತ್ರದವನು.. ಅವನು ಬಂದು,'' ನಾನು ಈ ಊರಿನ ಜನರನ್ನೆಲ್ಲಾ ತಿಂತೀನಿ..'' ಅಂದನಂತೆ.
ಆಗ ಜನ ''ಬೇಡಪ್ಪಾ, ನಾವೇ ದಿನಕ್ಕೊಬ್ಬರನ್ನು ಕಳಿಸ್ತೇವೆ.. ನೀವು ಆರಾಮಾಗಿ ನಿನ್ನ ಗುಹೆಯಲ್ಲಿರು...'' ಅಂದರಂತೆ..
ಅದೇ ಪ್ರಕಾರ ದಿನಕ್ಕೊಬ್ಬ ಮನುಷ್ಯ ಹೋಗುತ್ತಿದ್ದನಂತೆ. ಅವನು ಗುಹೆಯ ಬಾಗಿಲ ಬಳಿ ಹೋದ ಕ್ಷಣವೇ ಸತ್ತು ಹೋಗುತ್ತಿದ್ದನಂತೆ..
ಹೀಗಿರುವಾಗ ಆ ಊರಿಗೆ ಒಬ್ಬ ತುಂಬಾ ಧೈರ್ಯವಂತ ರಾಜಕುಮಾರ ಬಂದನಂತೆ. ಎಲ್ಲರ ಹ್ಯಾಪು ಮೋರೆ ನೋಡಿ'' ಏನಾಯ್ತು? ಯಾಕೆಲ್ಲ ಹೀಗಿದೀರಿ?'' ಅಂತ ಕೇಳಿದನಂತೆ.
ವಿಷಯ ತಿಳಿದು ಅವನು ಮರುದಿನ ಅವನೇ ಗುಹೆಯ ಬಾಗಿಲಲ್ಲಿ ನಿಂತನಂತೆ.. ನೋಡುತ್ತಾನೆ ಆ ರಾಕ್ಷಸ ಬೆಟ್ಟಕ್ಕಿಂತ ದೊಡ್ದದು!. ಆದರೂ ಏನಾಗುತ್ತೋ ನೊಡೋಣ ಅಂತ ಮುಂದೆ ನಡೆದನಂತೆ.. ಅವನು ಮುಂದೆ ಸಾಗಿದಂತೆಲ್ಲಾ ಆ ರಕ್ಕಸನ ಗಾತ್ರ ಕಡಿಮೆ ಆಗ್ತಿತ್ತಂತೆ.. ಅದರ ತೀರಾ ಸಮೀಪ ಹೋದಾಗ ಅದು ಒಂದು ಕೈಯ್ಯಲ್ಲಿ ಹಿಡಿಯುವಷ್ಟಾಯಿತಂತೆ.. ರಾಜಕುಮಾರ ಅದನ್ನು ಸಾಯಿಸುವ ಮೊದಲು ಅದನ್ನು '' ನೀನು ಯಾರು?'' ಅಂತ ಕೇಳಿದನಂತೆ
.
ಅದಕ್ಕೆ ಅದು ಉತ್ತರಿಸಿತಂತೆ..
...
....
....
...
''ನಾನು ಭಯ''

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ