ಭಾನುವಾರ, ನವೆಂಬರ್ 11, 2012

ಕವಿಯ ಬದುಕು


ಏಕಿನಿತು ಕಠಿಣವೋ ಬಡ ಕವಿಯ ಬದುಕು
ಸೂಕ್ಷ್ಮ ಸಂವೇದಿತ್ವ ಇವಗೇಕೆ ಬೇಕು?

ಜಗದಾವ ಮೂಲೆಯಲೋ ಬಂದ ಕ್ಷ್ಮಾಮಕ್ಕೆ
ಭುಗಿಲೆದ್ದ ಕ್ರೌರ್ಯದಾ ಅಟ್ಟಹಾಸಕ್ಕೆ
ಉಗ್ರರಾರ್ಭಟಕೆ ಕಂಗೆಟ್ಟ ಮನುಕುಲಕೆ
ಮರುಗುವುದು ಕವಿ ಹೃದಯ ಈ ಪರಿಯಲೇಕೆ?

ಭೂಕಂಪ ದಿಂದ ಜನ ಯಮಪುರಿಗೆ ಪೋಗೆ
ನೂಕು ನುಗ್ಗುಲಲಿ ಕಾಲ್ತುಳಿತಗಳು ಜರುಗೆ
ವಿಕೃತತೆಯು ಮೇಲಾಗಿ ಸುಗುಣ ತಲೆ ಬಾಗೆ
ಏಕೆ ಕವಿಯಾತ್ಮವನು ದಹಿಸುವುದು ಬೇಗೆ?

ಏಕಿಷ್ಟು ಸೂಕ್ಷ್ಮವೂ ಕಾಣೆ ಕವಿ ಮನಸು
ಏನೋ ಸಂಕಟ ಯಾರ ಮೇಲೋ ತುಸು ಮುನಿಸು
ಕಲ್ಲೆದೆಯಲೂ ಹೂವನರಳಿಸುವ ಕನಸು
ಮಾಡಲರಿಯರದ ನೋವು ಅದನೆಂದು ನನಸು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ