ಶನಿವಾರ, ಸೆಪ್ಟೆಂಬರ್ 20, 2014

ಹೀಗಾದರೆ ಹೇಗೆ?

`` ಗಾಂಧೀಜಿಯವರ ಜನ್ಮದಿನ ಯಾವತ್ತು? ಅವರು ಬರೆದ ಪುಸ್ತಕ ಯಾವುದು?'' ಇಂಥ ಸರಳ ಪ್ರಶ್ನೆಗಳಿಗೂ  ನಮ್ಮ ಶಿಕ್ಷಕರು ಉತ್ತರ ಕೊಡಲು ಅಸಮರ್ಥರಾಗಿ ತಡವರಿಸಿದರೆಂಬ ಪತ್ರಿಕಾ ವರದಿ  ನಿಜಕ್ಕೂ  ಚಿಂತೆಗೀಡುಮಾಡಿತು.. ಇದು ಶಿಕ್ಷಕ ಸಮುದಾಯವೇ ತಲೆ ತಗ್ಗಿಸುವಂಥದ್ದು..


 ಶಿಕ್ಷಕರ ಕೆಲಸ ಅತ್ಯಂತ ಜವಾಬ್ದಾರಿಯಿಂದ ಕೂಡಿದ್ದು ಅವರು ಅದನ್ನು  ತುಂಬಾ ಶ್ರದ್ಧೆಯಿಂದ ಮಾಡಬೇಕು.. ಅದಕ್ಕಾಗಿ ಪ್ರತೀ ದಿನವೂ  ಕಲಿಯುತ್ತಿರುವ ಅನ್ವೇಷಿಸುವ  ಕುತೂಹಲಭರಿತ  ಮನಸ್ಸಿರಬೇಕು.. ಪ್ರತೀ ತರಗತಿಯನ್ನು ತೆಗೆದುಕೊಳ್ಳುವ ಮೊದಲೂ ಅಧ್ಯಯನ ಮಾಡುವುದೂ ಅಗತ್ಯವಲ್ಲದೇ ಮಕ್ಕಳು ಕೇಳಬಹುದಾದ ಎಲ್ಲಾ ಬಗೆಯ ಪ್ರಶ್ನೆಗಳಿಗೂ ಉತ್ತರಿಸುವ ಸಿದ್ಧತೆ ಕೂಡಾ ಮಾಡಿಕೊಳ್ಳಬೇಕಾಗುತ್ತದೆ.. ಹಾಗೂ ಯಾವುದೇ ಪ್ರಶ್ನೆಗೆ ಉತ್ತರ ತಿಳಿಯದಿದ್ದರೆ/ನೆನಪಿಗೆ ಬಾರದಿದ್ದರೆ  `` ನನಗೆ ತಿಳಿದಿಲ್ಲ/ನೆನಪಿಲ್ಲ  ತಿಳಿದ್ ಹೇಳುತ್ತೇನೆ...'' ಎಂದು ಹೇಳುವ ಪ್ರಾಮಾಣಿಕತೆ ಹಾಗೂ  ಆ ಮಾತನ್ನು ಉಳಿಸಿಕೊಳ್ಳುವ  ಬದ್ಧತೆ ಬೇಕು..  ಆಗ ಯಾರೂ ಉತ್ತಮ ಶಿಕ್ಷಕ ಎಂದು ಹೊಗಳದಿದ್ದರೂ   ಮನಸ್ಸಾಕ್ಷಿ   ಒಪ್ಪುತ್ತದೆ ..ಅಲ್ಲವೇ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ