ಶನಿವಾರ, ಸೆಪ್ಟೆಂಬರ್ 20, 2014

`ನಾವು ನಿಮ್ಮ ರಕ್ಷಕರು''

`` ನಮಸ್ಕಾರ ಇನ್ಸ್ಪೆಕ್ಟರ್ ಸರ್.  ನನ್ ಹೆಸರು ರಾಮ್ ಪ್ರಸಾದ್... ಇಲ್ಲಿ ತುಂಬಾ ಗಲಾಟೆ ನಡೀತಿದೆ.. ನೀವು ಬೇಗ ಬರ್ದಿದ್ರೆ ಅನಾಹುತಾನೇ ಆಗಬಹುದು  ಬೇಗ್ನೇ ಬನ್ನೀ ಸರ್ ..ಪ್ಲೀಜ್...' ಪೋಲೀಸ್ ಸ್ಟೇಶನ್ ಗೆ...
.ಕಾಲ್ ಬಂದ ಕೂಡಲೇ ಇನ್ಸ್ಪೆಕ್ಟರ್  ಧಾವಿಸಿದರು ಜೀಪ್ ನಲ್ಲಿ...
``ಯಾರ್ರೀ ರಾಮ್ ಪ್ರಸಾದ್...''?  
ಗಡಸು ದನಿ ಕೇಳಿ ಹದಿನೆಂಟರ ಹುಡುಗ ಓಡಿ ಬಂದ...
`` ನಾನೇ ಸರ್, ನಾನೇ ಕಾಲ್ ಮಾಡಿದ್ದು...... ನಿಮ್ಮ ಜೀಪ್ ನೋಡಿ ರೌಡಿಗಳೆಲ್ಲ ಓಡಿ ಹೋದ್ರು ಸರ್.. ಥ್ಯಾಂಕ್ಸ್ ಸರ್ ಸಮಯಕ್ಕೆ ಸರಿಯಾಗಿ ಬಂದು ಆಗೋ ಅನಾಹುತನ ತಪ್ಪಿಸಿದ್ರಿ.. '' 
 `ನಾನೇ ಕಾಲ್ ಮಾಡಿದ್ದು ' ಅನ್ನೋ ಹೆಮ್ಮೆ` ಎಂಥ ಗಲಾಟೆ ಆಯ್ತಲ್ಲ!?'  ಅನ್ನೋ ಆತಂಕ, ` ಸಧ್ಯ ತಪ್ಪಿ ಹೋಯ್ತಲ್ಲ...'  ಅಂತ ನಿರಾಳತೆ, ಕೃತಜ್ಞತೆ ಎಲ್ಲ ಇತ್ತು ಅವನ ಧ್ವನಿಯಲ್ಲಿ..
 `` ಎ! ಏನೋ ' ಪೋಲೀಸ್ರ ಜೊತೆ ಆಟ ಆದ್ತಿದ್ದೀಯಾ? ನಡೀ ಸ್ಟೇಶನ್ ಗೆ ಅಂತ ಕತ್ತಿನ ಪಟ್ಟಿಗೆ ಕೈ ಹಾಕಿದ್ರು...
  ಆಗ ಅಲ್ಲಿದ್ದ ಹಿರಿಯರು `` ಸರ್ ಅವನದ್ದೇನೂ ತಪ್ಪಿಲ್ಲ.. ಏನಾಗುತ್ತೋ.. ಅನ್ನೋ ಭಯದಲ್ಲಿ ಇಂಥ ಸಂದರ್ಭದಲ್ಲಿ ಪೋಲೀಸರನ್ನು ಕರೀಬೇಕಂತ ಹೇಳಿದ್ದು ನಾನೇ.. ಅವನ ಟೀಚರ್...''
'' ಓ.. ಇದರಲ್ಲಿ ನಿಮ್ ಕೈವಾಡನೂ ಇದ್ಯ? ನೀವೂ ಹತ್ತಿ...
  ``ಅಯ್ಯೋ!! ಅವನನ್ನು ಬಿಟ್ಬಿಡಿ ಸರ್.. ಅವಂಗೇನೂ ಗೊತ್ತಿಲ್ಲ .. ತಿಳೀದೆ ತಪ್ ಮಾಡಿದಾನೆ  '' ಕಣ್ಣೀರಿಡ್ತಾ ಬಂದು ಕಾಲು ಹಿಡಿದ ತಂದೇನೂ ಹತ್ತಿಸಿಕೊಂಡು  ಪೋಲೀಸ್ ಜೀಪ್ ಸ್ಟೇಶನ್ ಗೆ ಹೋಯ್ತು..
ಛಟ್!! ಛಟಾರ್!... ...''
`` _________________ ಮಗನೆ ' ಪೋಲೀಸ್ ಜೊತೆ ಹುಡುಗಾಟ ಆಡ್ತೀಯಾ?   ನಾವೇನು ನಿನ್ನ ಆಳುಗಳಾ?...""
  ಸಂಬಂಧಿಕರು ಆ ಮೂವರನ್ನೂ ಇದ್ದಬದ್ದ ಹಣವನ್ನೆಲ್ಲಾ ಕೊಟ್ಟು ಬಿಡಿಸಿಕೊಂಡು ಹೋಗುವಲ್ಲಿ ಅರ್ಧ ಜೀವವಾಗಿದ್ದರು. ಆ ಮೂವರೂ.. ಹೊರಗೆ ಬಂದು  ನಿಟ್ಟುಸಿರಿಟ್ಟು ನೋಡಿದಾಗ  ಕಲಾವಿದನೊಬ್ಬನ ಸುಂದರ ಕೈಬರಹದಲ್ಲಿ ರಾರಾಜಿಸುವ ಬೋರ್ಡ್ ಕಂಡಿತು

``ನಾವು ನಿಮ್ಮ ರಕ್ಷಕರು''

` ನಿಮಗೆ ಸಹಾಯ ಬೇಕೇ?'' ಸಾರ್ವಜನಿಕರ ಸೇವೆಯೇ ನಮಗೆ ಪೂಜೆ!!''

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ