ಗುರುವಾರ, ಮೇ 15, 2014

ನಿರಾಸೆ

ಅಂದು....
ಅವ ನನ್ನ ನೋಡಿ
ಮುಗುಳ್ನಕ್ಕ..
 ನಾನು ಪ್ರತಿ ನಗಲಿಲ್ಲ..

ನನಗಾಗಿ
ಕವನ ಬರೆದ..
ನಾನೋದಲಿಲ್ಲ...
.
ನನಗಾಗಿ ನದಿ ತೀರದಿ
 ಕಪ್ಪೆ ಗೂಡು ಕಟ್ಟಿದ
ನಾ ಗಮನಿಸಲಿಲ್ಲ...

ನನಗಾಗಿ ಪ್ರೇಮ
ಕವನ ಹಾಡಿದ
 ನಾನಾಲಿಸಲಿಲ್ಲ..

ನನಗಾಗಿ
ಮಲ್ಲಿಗೆ ತಂದ
ನಾ ಮುಡಿಯಲಿಲ್ಲ..

ಅವನ ಅನುರಾಗಕ್ಕೆ
ದನಿಯಾಗಲಿಲ್ಲ...

ಕೊನೆಗೆ....
 ಯೋಧಾನಾಗುವೆನೆಂದು
ವಿದಾಯ ಹೇಳಲು ಬಂದ..
ನಾ ಬೇಡವೆಂದು ಗೋಗರೆದೆ
ಅವ  ದೃಢ ಚಿತ್ತ
ಕೇಳಲಿಲ್ಲ
ಜಾಗ್ರತೆಯಾಗಿ ಬೇಗ ಬಾ 
ಎಂದು ಅಂಗಲಾಚಿಗೆ
ನಿಷ್ಕರುಣಿ
ಬರಲೇ ಇಲ್ಲ....


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ