ಗುರುವಾರ, ಮೇ 15, 2014

ಶ್ರೀನಿವಾಸ ಕಲ್ಯಾಣ

ಆಗಾಗ ನೆಂಟರಿಷ್ಟರು, ಸ್ನೇಹಿತಗು ಅವರ ಮನೆಗಳಲ್ಲಿ ಶುಭ ಕಾರ್ಯಗಳಾದ ನಂತರ ದೇವಾಲಯಗಳಲ್ಲಿ ಶ್ರೀನಿವಾಸ ಕಲ್ಯಾಣ  ಮಾಡಿಸುತ್ತಾರೆ.. ಆಗ ನಮಗೂ ಆಹ್ವಾನ ಬರುತ್ತದೆ.. ಆಗೆಲ್ಲ ನನ್ನ ಮಗಳು `` ಯಾಕಮ್ಮ ಶ್ರೀನಿವಾಸ ಕಲ್ಯಾಣ ಮಾಡ್ತಾರೆ? ಅದು ದೇವರಿಗೆ ಇಷ್ಟನ? ಹಾಗಂತ ಅವನು ಹೇಳಿದಾನ? ಯಾವಾಗ ? 
 ಪದೇ ಪದೇ ಮದುವೆ ಮಾಡಿಕೊಳ್ಳಕ್ಕೆ ಬೋರಾಗಲ್ವ?...  '' ಹೀಗೆ ನೂರೆಂಟು ಪ್ರಶ್ನೆ ಕೇಳ್ತಾಳೆ..
 ಇದ್ಯಾವುದಕ್ಕೂ ಅವಳಿಗೆ ಸಮಾಧಾನವಾಗುವಂಥ ಉತ್ತರ ನಂಗೆ ಸಿಕ್ಕಿಲ್ಲ..
ಅಲ್ಲದೆ  ಶ್ರೀನಿವಾಸ ಪದ್ಮಾವತಿಯನ್ನು ಮದುವೆಯಾಗಿ  ಸುಖ ಸಂಸಾರ ಮಾಡುವ ಮೊದಲೇ ಕಲ್ಲಾದನಲ್ಲ? ಅವನ ಮದುವೆಯನ್ನು ಮತ್ತೆ ಮತ್ತೆ ಮಾಡಿದರೆ ಅವನಿಗೆ ನೋವಾಗುತ್ತೇನೋ ಅನ್ನಿಸುತ್ತೆ.. ಅಲ್ಲವೇ?


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ