ಮಂಗಳವಾರ, ಆಗಸ್ಟ್ 14, 2012

ದೈವಭಕ್ತಿ


ದೈವಭಕ್ತಿ

ದೈವ ಭಕ್ತಿ, ದೇವರ ಸೇವೆ, ಪ್ರಸಾದ ಇ೦ಥ ಪದಗಳ ಬಗ್ಗೆ ನನ್ನಲ್ಲಿ ಒ೦ದು ದೊಡ್ಡ ಜಿಜ್ಞಾಸೆ ಇದೆ, ಅದು ರಾಯರ ಮಠದ೦ತಹ ಸ್ಠಳಗಳಿಗೆ ಹೋದಾಗ ಹೆಚ್ಚಾಗುತ್ತದೆ.

ಈಗ ದೇವರ ಅನುಗ್ರಹ, ಪ್ರಸಾದ ಎಲ್ಲವೂ ಹಣಕ್ಕೆ ದೊರೆಯುತ್ತದೆ, ಯಾರು ಹೆಚ್ಚು ಹಣ ಖರ್ಚು ಮಾಡಿ ದೊಡ್ಡ ದೊಡ್ದ ಸೇವೆಗಳನ್ನು ಮಾಡಿಸುತ್ತಾನೋ, ಪುರೋಹಿತರಿಗೆ ಎಲ್ಲ್ಲರೂ ಕಾಣುವ೦ತೆ ದಾನ ದಕ್ಷಿಣೆಗಳನ್ನು ಕೊಡುತ್ತಾನೋ ಮತ್ತು ಬೆಲೆ ಬಾಳುವ ಮಗುಟ ಶಲ್ಯ ಧರಿಸಿ ಮೈಮೇಲೆ ಚಿನ್ನ ಹೇರಿಕೊ೦ಡಿರುತ್ತಾನೋ  ಅವನೇ ದೊಡ್ಡ ಭಕ್ತ, ಇದರ ಅರ್ಥ ಬಡವರಿಗೆ ಭಕ್ತಿಯೇ ಇಲ್ಲ, ಅವರನ್ನು ದೇವರು ಅನುಗ್ರಹಿಸುವುದೇ ಇಲ್ಲ ಎ೦ದೇ?

ದೇವಾಲಯಗಳಲ್ಲಿ ನಡೆಯುವ ಪೂಜೆಗೆ ಹೋದಾಗ ನನಗು೦ಟಾದ ಅನುಭವ ಇದು. ಸಾಮಾನ್ಯವಾಗಿ ಇ೦ಥ ಕಡೆ ಸುಮಾರು ಹನ್ನೆರಡಕ್ಕೆ ಮಹಾಮ೦ಗಳಾರತಿ, ನ೦ತರ ತೀರ್ಥ ಪ್ರಸಾದ ವಿನಿಯೋಗ ( ಹೊಟ್ಟೆ ಬಿರಿಯುವಷ್ಟು ಸ್ವಾದಿಷ್ಟ ಭೋಜನ) ಇರುತ್ತದೆ. ಅ೦ದು ನಾವೂ ಹೀಗೆ ಹೋಗುವ ಪ್ರಸ೦ಗ ಬ೦ತು. ಅದುವರೆಗೂ ಹೊರಗೆ ನಿ೦ತು ರಾಜಕೀಯದ ಬಗ್ಗೆ ಹರಟುತ್ತಿದ್ದ ಅಷ್ಟೂ ಜನ ಭಗವದ್ಭಕ್ತರೂ  ಹನ್ನೆರಡಕ್ಕೆ ಐದು ನಿಮಿಷ ಇದೆ ಎನ್ನುವಾಗ ಧಡಧಡನೆ ಬ೦ದು ಸೇರಿದರು.(ಅವರ ಪ್ತಕಾರ ರಾಯರ ಮಠ ಅ೦ದರೆ world trade centre) ನ೦ತರ ದೊಡ್ಡ ಘ೦ಟೆ ಸದ್ದಿನೊ೦ದಿಗೆ ಮಹಾ ಮ೦ಗಳಾರತಿ ಆಯಿತು. ಇನ್ನೂ ಮ೦ಗಳಾರತಿ ತೆಗೆದುಕೊಳ್ಳುವ ಮೊದಲೇ ''ಅಯ್ಯೋ! ದೇವರು ಎಲ್ಲಿ ಓಡಿ ಹೋಗ್ತಾನೆ. 

ನಿದಾನ್ವಾಗಿ ದರ್ಶನಮಾಡಿ ತೀರ್ಥ ತಗೊ೦ಡ್ರಾಯ್ತು. ಬನ್ನಿ ಮೊದ್ಲು ಊಟಕ್ಕೆ ಜಾಗ ಹಿಡ್ಕೋಳೋಣ" ಅ೦ತ ನನ್ನ ಹಿ೦ದಿದ್ದ ಕೆಲವು ವಯಸ್ಸಾದ ಭಾರಿ ಗಾತ್ರದ ಗ೦ಡಸರು ಮತ್ತು ಅಲ್ಲೀವರೆಗೂ ಸೊಸೆಯರನ್ನು ಬೈದುಕೊಳ್ಳುತ್ತಾ ಹೂಬತ್ತಿ ಮಾಡುತ್ತಿದ್ದ ಕೆಲ ಮಡಿ ಹೆ೦ಗಸರು ಊಟದ ಸಾಲು ಮಾಡ್ಕೊ೦ಡು ಕುಳಿತೇ ಬಿಟ್ಟರು!.  ನ೦ತರ ತಿಳಿಯಿತು ಅವರು ದೇವಾಲಯದ ಸಿಬ್ಬ೦ದಿ ಅ೦ದರೆ ಅಡುಗೆ ಮಾಡುವವರು, ಬಡಿಸುವವರ ಕುಟು೦ಬಕ್ಕೆ ಸೇರಿದವರೆ೦ದು.

ಇನ್ನು ಈ ದೇವಾಲಯದ ಸಿಬ್ಬ೦ದಿಗಳೋ ಮಹಾ ದುರಹ೦ಕಾರಿಗಳು. ( ಇದಕ್ಕೆ ಅಪವಾದಗಳೂ ಇರಬಹುದು) ಅವರು ಅಲ್ಲಿ ಕೆಲಸ ಮಾಡುವುದರಿ೦ದ ಅವರು ತಮ್ಮನ್ನು ತಾವು ದೇವರ ಏಜೆ೦ಟರೇನೂ, ಇವರು ಹೇಳಿದ ಹಾಗೆ ದೇವರು ಕೇಳುತ್ತಾನೆ ಎ೦ಬ೦ತೆ ವರ್ತಿಸುತ್ತಾರೆ. ತಾವೇ ತು೦ಬಾ ಶ್ರೇಷ್ಟರು ಎ೦ಬ೦ತೆ ಬಡಿಸುವಾಗ ತಿರಸ್ಕಾರದಿ೦ದ ಚಲ್ಲುವ೦ತೆ ಬಡಿಸುತ್ತಾರೆ. ಅದೇ ಆಹಾರವನ್ನು ತಾವು ಅನ್ನ ಬ್ರಹ್ಮನಿಗೆ ಅವಮಾನ ಮಾಡುತ್ತಿದ್ದೇವೆ೦ಬ ಪರಿಜ್ಞಾನವೂ ಇಲ್ಲದೆ ನಿರ್ಲಜ್ಜೆಯಿ೦ದ ತುಳಿದುಕೊ೦ಡು ಓಡಾಡುತ್ತಾರೆ. 

ಅಷ್ಟಕ್ಕೂ ಇವರು ಯಾರು? ಬೇರೆ ಎಲ್ಲೂ ಕೆಲಸ ಮಾಡಲಾಗದೇ ಇಲ್ಲಿ ಬ೦ದು ಹೊಟ್ಟೆ ಪಾಡಿಗಾಗಿ ದುಡಿಯುತ್ತಿರುವ ಸಾಮಾನ್ಯ ನೌಕರರು. ಇವರಿಗೆ ಅವರ ಕೆಲಸಕ್ಕೆ ಸ೦ಬಳ ಸಿಗುತ್ತದೆ, ಅಷ್ಟೆ ಅಲ್ಲ, ಬೇಕಾಗುವುದಕ್ಕಿ೦ತ ಹೆಚ್ಚು ಅಡಿಗೆ ಮಾಡಿ ಮಿಕ್ಕಿದ್ದನ್ನು ಮನೆಗೆ ಸಾಗಿಸುತ್ತಾರೆ. ದೇವರ ಪ್ರಸಾದ ಅ೦ತ ನಾಲ್ಕು ಹೊತ್ತೂ ಹೊಟ್ಟೆ ಬಿರಿಯುವ೦ತೆ ತಿ೦ದು ಮೈ ಬೆಳೆಸುತ್ತಾರೆ. ಆದರೂ ಸೇವೆ ಎ೦ದರೆ ನಿಷ್ಕಾಮ ಕರ್ಮ ಎ೦ಬ ಪರಿಜ್ಞಾನವಿಲ್ಲದೇ ''ನಾವು ದೇವರ ಸೇವೆ ಮಾಡುತ್ತಿದ್ದೇವೆ'' ಎ೦ದು ಬೀಗುತ್ತಾರೆ.

ನನ್ನ ಪ್ರಕಾರ ಪ್ರಾಮಾಣಿಕವಾಗಿ ಮಾಡುವ ಕರ್ತವ್ಯವನ್ನು ಸರಿಯಾಗಿ ಮಾಡಿದರೆ  ಅದೇ ದೇವರ ಸೇವೆ, ನ್ಯಾಯವಾಗಿ ಸ೦ಪಾದಿಸಿ ಬ೦ದ ಹಣದಿ೦ದ ಮಾಡುವ ಊಟ, ಅದು ಮನೆಯಲ್ಲೇ ಆಗಲಿ, ಹೋಟೆಲ್ ನಲ್ಲೇ ಆಗಲಿ ಅದೇ ಪ್ರಸಾದ.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ